Skip to main content

Posts

Showing posts from July, 2017

ಚಂದ್ರಿಕೆಯ ಸುಧೆಯಲ್ಲಿ ತೋಯಲೇ ಬೇಕು

ಅದು ೨೦೦೯ , ನನ್ನ ಬಳಿ ಒಂದು ಕರೀ ಬಣ್ಣದ ಆಕ್ಟಿವಾ ಇತ್ತು . ಅದರ ವರ್ಣನೆ ಈಗಾಗಲೇ ಮಾಡಿದ್ದೇನೆ . ಏನೇ ಅಂದರೂ ಅದೊಂದು ನಂಬಿಕಸ್ಥ ಗಾಡಿ . ಎಲ್ಲೆಂದರಲ್ಲಿಗೆ ಎಷ್ಟೊತ್ಟಿನಲ್ಲಿ ಎಷ್ಟು ಲೋಡ್ ಹಾಕಿದ್ರೂ ಎಳೆದು ಕೊಂಡು ಹೋಗುತ್ತಿದ್ದ ಗಾಡಿ ಅದು . ಅದರ ಮೇಲೆ ಕೂತು ಆಕ್ಸೆಲರೇಟರ್ ಕೊಟ್ರೆ ರೊಯ್ಯನೆ ನುಗ್ಗಿ ರಸ್ತೆಯಲ್ಲಿರುವ ಗಾಡಿಗಳನ್ನೆಲ್ಲ ಹಿಂದೆ ಹಾಕುತ್ತಿತ್ತು . ಆಗತಾನೆ ನೈಸ್ ರಸ್ತೆ ಓಡಾಟಕ್ಕೆ ತೆರವಾಗಿತ್ತು . ರಸ್ತೆಯಲ್ಲಿ ವಾಹನಗಳ ಓಡಾಟ ತೀರಾ ವಿರಳ . ಎಲ್ಲಿಂದ ಹೊರಟರೆ ಎಲ್ಲಿಗೆ ಹೋಗತ್ತೆ ಅನ್ನೋದೇ ಗೊತ್ತಾಗ್ದೇ ಇರೋಷ್ಟು ಅಪರಿಚಿತ ರಸ್ತೆ ಅದು . ಖಾಲಿ ರಸ್ತೆಯ ತೆರೆದ ಬಾಹುಗಳ ಅಪ್ಪುಗೆಯ ಆಸೆಗೆ ಮುನ್ನುಗ್ಗಿ ಬರೋ ವಾಹನಗಳು ತಿರುವು ತಪ್ಪಿಸಿಕೊಂಡು ಅಲೆಯುತ್ತಿದ್ದ ದೃಶ್ಯ ಸಾಮಾನ್ಯ . ಬನಶಂಕರಿಯ ಪಿ ಇ ಎಸ್ ಕಾಲೇಜ್ ಬಳಿ ಶುರುವಾಗುತ್ತಿದ್ದ ರಸ್ತೆ ಮುಂದೆ ಎಡಕ್ಕೆ ತಿರುಗಿ ಕನಕಪುರ ರಸ್ತೆ , ಬನ್ನೇರುಘಟ್ಟ ರಸ್ತೆಯ ಕಡೆ ಅಥವಾ ಬಲಕ್ಕೆ ತಿರುಗಿದರೆ ಮೈಸೂರು ರಸ್ತೆಯ ಕಡೆ ಹೊರಳುತ್ತಿತ್ತು . ಈಗ ಬಿಡಿ ನೀವೆಲ್ಲ ಸಾವಿರಾರು ಬಾರಿ ಆ ರಸ್ತೆಯಲ್ಲಿ ಒಡಾಡಿರುತ್ತೀರ . ಆಗ ಆ ರಸ್ತೆ ಹೊಸದು , ಬೋರ್ಡ್‌ಗಳು ಕೂಡ ಸರಿಯಾಗಿ ಇರಲಿಲ್ಲ . ಎಲ್ಲಿ ತಿರುಗು ಹೇಗೆ ಹೋಗಬೇಕೆಂಬುದೇ ಒಂದು ಯಕ್ಷಪ್ರಶ್ನೆಯಾಗಿತ್ತು . ಹೀಗಿರಲು ಒಂದು ದಿನ ಬನ್ನೇರುಘಟ್ಟ ರಸ್ತೆಯ ಅಮರ್ ಮನೆಗೆ ಹೊರಟಿದ್ದೆ . ಸಮಯ ಸುಮಾರು ರಾತ್ರಿ ೧೦ : ೩೦ ಇರಬಹುದು...

ಕಿರುಗತೆ - ಕವಲು

ಅಂದು ಭಾನುವಾರ . ಗಣೇಶಯ್ಯನ ಮನೆಯಲ್ಲಿ ಸಂಭ್ರಮವೋ ಸಂಭ್ರಮ . ಗಣೇಶಯ್ಯನ ಧರ್ಮಪತ್ನಿ ಸರೋಜಳಿಗೆ ೩ನೇ ಮಗುವಾದ ಶುಭ ದಿನ . ೩ನೇ ಮಗುವೂ ಹೆಣ್ಣಾದರೂ ಗಂಡಾದಷ್ಟೆ ಖುಷಿ ಮನೆಯವರಿಗೆ . ಅವರೆಂದೂ ಹೆಣ್ಣು ಗಂಡು ಎಂದು ಭೇದ ಮಾಡಿದವರಲ್ಲ . ಹೆಣ್ಣು ಮಗುವೂ ಸಹ ಗಂಡಿನಷ್ಟೇ ಸಬಲೆಯೂ , ಗಂಡು ಮಕ್ಕಳಿಗಿಂತ ಪರಿಪೂರ್ಣರೂ ಆಗುತ್ತವೆಂದು ಅವರ ನಂಬಿಕೆ . ಮೊದಲೆರಡು ಹೆಣ್ಣು ಮಕ್ಕಳು ಕೂಡ ಆ ಮಾತಿಗೆ ತಕ್ಕಂತೆಯೇ ನೆಡೆದುಕೊಂಡಿದ್ದವು . ಶಾಲೆಯಲ್ಲಿ ಆಟದಲ್ಲಿ ಪಾಠದಲ್ಲಿ ಮುಂದು , ಮನೆಯಲ್ಲಿ ಅಮ್ಮನಿಗೆ ಸಹಾಯ , ಅಪ್ಪನೊಟ್ಟಿಗೆ ಪೇಟೆಗೆ ಹೋಗಿ ತರಕಾರಿ ಸಾಮಾನು ತರುವುದು , ಸಣ್ಣ ಪುಟ್ಟ ಕಥೆ ಕವನ ಬರೆಯುವುದು ಒಟ್ಟಿನಲ್ಲಿ ಬೇರೆ ಮನೆಯ ಹೆಣ್ಣು ಮಕ್ಕಳು ತಲೆ ತಗ್ಗಿಸುವಂತಹ ಜಾಣ ಮಕ್ಕಳು . ಗಣೇಶಯ್ಯ ಬಹಳ ಪ್ರ್ಯಾಕ್ಟಿಕಲ್ ಮನುಷ್ಯ . ಕಡ್ಡಿ ಮುರಿದಂತೆ ಮಾತಾಡುವ ಜಾಯಮಾನ . ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸಿದರೂ ಕೈ ಎತ್ತಿ ಸಹಾಯ ಮಾಡಿದ್ದು ತೀರಾ ಕಡಿಮೆ . ತಾನಾಯ್ತು , ತನ್ನ ಸಂಸಾರವಾಯ್ತು . ಜೀವನಕ್ಕೆ ಎಷ್ಟು ಬೇಕೋ ಅಷ್ಟು ಆಸ್ತಿ ಮಾಡಿ ಆಗಿದೆ . ಆ ಆಸ್ತಿಯೇ ಮತ್ತಷ್ಟು ಆಸ್ತಿ ಮಾಡುವಷ್ಟು ಜಾಣ್ಮೆ ಅವರಲ್ಲಿದೆ . ಅವರದ್ದೊಂದು ಪರಿಪಾಠವಿದೆ . ಮೊದಲೆರಡು ಮಕ್ಕಳು ಹುಟ್ಟಿದಾಗ ಮಾವಿನ ಸಸಿ ನೆಟ್ಟಿದ್ದರು . ಅದರ ಪೋಷಣೆ ಆ ಮಗುವಿಗೆ ಸೇರಿದ್ದು . ಚಿಕ್ಕಂದಿನಿಂದಲೇ ಪ್ರೀತಿ ಆರೈಕೆ ಮಾಡುವ ಗುಣ ಬೆಳೆಯಲಿ ಎಂಬ ಉದ್ದೇಶ ಅವರದ್ದು . ಹಾಗೆಯೇ ೩...

Haka - a war dance

ಕ್ರಿಕೆಟ್ ಆಟದಲ್ಲಿ ಆಕ್ರಮಣಶೀಲತೆಯನ್ನು ನಾವೆಲ್ಲ ನೋಡಿಯೇ ಇದ್ದೇವೆ . ಈಗಿನ ಪೀಳಿಗೆಯ ಆಟಗಾರರ ಆಟವೇ ಆಕ್ರಮಣದ ರೀತಿ . ವಿರಾಟ್ ಕೊಹ್ಲಿಯಂತಹ ಆಟಗಾರರು ಮೈದಾನದ ಒಳಗೂ ಹೊರಗೂ ತಮ್ಮ ಈ ಒಂದು ಆಕ್ರಮಣಾಶೈಲಿಯ ಆಟ , ಮಾತಿನಿಂದಲೇ ಹೆಸರುವಾಸಿ . ಒಂದು ಕಾಲದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡ ಈ ರೀತಿಯ ಆಕ್ರಮಣಕಾರಿ ಆಟಕ್ಕೆ ಚಿರಪರಿಚಿತವಾಗಿತ್ತು . ಎದುರಾಳಿಯ ತಂಡಕ್ಕೆ ಕಿಚಾಯಿಸುವುದು , ರೇಗಿಸುವುದು , ದುರುಗುಟ್ಟಿ ನೋಡುವುದು , ಕ್ರೀಸ್ನಲ್ಲಿ ನಿಂತ ಆಟಗಾರರ ಬಗ್ಗೆ ಮಾತನಾಡುವುದು , ಅವರ ಆಟದ ಮೇಲಿನ ಹಿಡಿತ ತಪ್ಪುವಂತೆ ಮಾಡುವುದು ಒಟ್ಟಿನಲ್ಲಿ ಪಂದ್ಯ ಗೆದ್ದರೆ ಸಾಕು ಎನ್ನು ಮನೋಭಾವ . ಅಸ್ತ್ರಲಿಯಾದ ವೇಗಿ ಮರ್ವ್ ಹ್ಯೂಗ್ಸ್ ಇಂಥ ಆಕ್ರಮಣ ಆಟದಲ್ಲಿ ಎತ್ತಿದ ಕೈ . ಸ್ಲೆಡ್ಜಿಂಗ್ ಎಂದೇ ಕರೆಯಲಾಗುವ ಈ ರೀತಿಯ ಕಿಛಾಯಿಸುವ ಮನೋಭಾವ ಅವನಿಗೆ ಹೊಸದೇನಲ್ಲ . ಕ್ರಿಕೆಟ್ನ ದಂತಕಥೆ ವಿವ್ ರಿಚರ್ಡ್ಸ್ ಗೆ ಗುರಾಯಿಸಿ " ಫಕ್ ಆಫ್ " ಎಂದು ಹೇಳಿದ ಮಹಾನುಭಾವನೀತ . ಆತನ ಮೀಸೆ , ಓಡಿ ಬರುವ ಶೈಲಿ , ಕೆಂಡದಂತಹ ದುರುಗುಟ್ಟಿ ನೋಡುವ ಕಣ್ಣುಗಳು , ಬಾಯಿಂದ ಪುಂಖಾನುಪುಂಖವಾಗಿ ಉದುರುತ್ತಿದ್ದ ಬೈಗುಳಗಳು ಆತನಿಗೆ ಈ ಸ್ಲೆಡ್ಜಿಂಗ್ ಪ್ರಪಂಚದಲ್ಲಿ ವಿಶಿಷ್ಟ ಸ್ಥಾನ ಕೊಟ್ಟಿವೆ . ಕೆಣಕುತ್ತಿರುವ ಮರ್ವ್ ಹ್ಯೂಗ್ಸ್  ಎಲ್ಲ ಆಟಗಳಲ್ಲೂ ಎದುರಾಯಿಲಾ ಸ್ಥೈರ್ಯ ಕುಸಿಯುವಂತೆ ಮಾಡಲು ಕಿಚಾಯಿಸುವುದು , ರೇಗಿಸುವುದು ಸಾಮಾ...

ಸರ್ ಪಾಸ್ - ಚಾರಣದ ಒಂದು ಅನುಭವ.

ಅದು ಸರ್ ಪಾಸ್. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಸಾವಿರಾರು ಪರ್ವತಗಳಲ್ಲಿ ಅದೊಂದು. ಸಮುದ್ರ ಮಟ್ಟದಿಂದ ೧೪೦೦೦ ಅಡಿಗಿಂತಲೂ ಎತ್ತರದ ಪರ್ವತ ಪ್ರದೇಶ. ಸುತ್ತಲೂ ಒಂದಕ್ಕಿಂತ ಒಂದು ಎತ್ತರವಾದ ಪರ್ವತ ಶಿಖರಗಳು. ಸಾರ ಉಮ್ಮ್ಗ ಪಾಸ್, ಪಿನ್ ಪಾರ್ವತಿ ಪಾಸ್, ಅನಿಮಲ್ ಪಾಸ್, ಪಾಪಸುರ, ಧರ್ಮಸುರ, ದೇವ್ ಟಿಬ್ಬೇ ಹೀಗೆ ಹಲಾವಾರು ಒಂದಕ್ಕಿಂತ ಒಂದು ಎತ್ತರವಾದ ಹಿಮಾಚ್ಛಾದಿತ ಶಿಖರಗಳು, ಸಾರ ಉಮ್ಮ್ಗ , ಪಾರ್ವತಿ, ಟಿಚು , ಬಡ್ಗಂ, ಪಾರ್ವತಿ ಹೀಗೆ ನೂರಾರು ಜರಿಯುವ ಐಸ್ ಹೊತ್ತ ಗ್ಲೇಶಿಯರ್ ಗಳು, ಗ್ರಹನ್ ನಲ್ಲ, ತೋಷ್ ನಲ್ಲ, ಇವೆರಡೂ ಒಡಗೂಡಿ ಮಂತಲೈ ಸರೋವರದಿಂದ ಹರಿದು ಬರುವ ಭೋರ್ಗರೆದು ಉಕ್ಕಿ ಹರಿವ  ಪಾರ್ವತಿ ನದಿ ಹೀಗೆ ಅದೊಂದು ವಿಸ್ಮಯ ವಿಶಿಷ್ಟ ಪ್ರಪಂಚ. ಸರ್ ಪಾಸ್ ತಲುಪಲು ೪ ದಿನಗಳ ಕಾಲ್ನಡಿಗೆಯ ಕಷ್ಟದ ಹಾದಿ. ಹಲವಾರು ಕೊರೆಯುವ ತೊರೆಗಳನ್ನು ದಾಟಿ, ಕಠಿಣ ಏರುಹಾದಿಯಲ್ಲಿ ನೆಡೆದು ಭೀಕರ ಬಿಸಿಲಿಗೆ ಮೈಯೊಡ್ಡಿ, ಕೊರೆಯುವ ಗಾಳಿಗೆ ಸಿಲುಕಿ, ಹೇಳದೆ ಕೇಳದೆ ಬರುವ ಬಿರುಮಳೆಯಲ್ಲಿ ನೆನೆದು, ಅಚಾನಕ್ಕಾಗಿ ಸುರಿಯುವ ಹಿಮಪಾತಕ್ಕಾಗಿ ಕಾದು ಕೊನೆಗೆ ಸರ್ ಪಾಸ್ ತಲುಪುವಿರಿ. ದಾರಿಯಲ್ಲಿ ನಿಮಗೆ ಸಿಗುವ ಪ್ರಕೃತಿಯ ಸೌಂದರ್ಯವನ್ನು ಸವಿದು, ಕಾಲು ಜಾರಿ ಬಿದ್ದು, ಅಲ್ಲಲ್ಲಿ ಹಿಮ ಕರಗಿ ಹರಿಯುವ ನೀರು ಕುಡಿದು, ಕೆಲವೊಂದು ಕಡೆ ಹಳ್ಳಿಯವರು ಮಾರುವ ಮ್ಯಾಗಿ ತಿಂದು, ಅಲ್ಲಲ್ಲಿ ಕ್ಯಾಂಪ್ ಮಾಡಿ ಚಳಿಯಲ್ಲಿ ಮುರುಟಿ ಮಲಗಿ, ಕರಡಿಯ ಹೆದರಿಕ...

ಶರಾವತಿ - The story behind Power Generation.

ಶರಾವತಿ ನದಿ ಕರ್ನಾಟಕದ ಜೀವ ನದಿಗಳಲ್ಲೊಂದು, ನೀರಾವರಿ, ಮೀನುಗಾರಿಕೆಗಿಂತ ವಿಶಾಲ ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡುವ ಹಲವಾರು ಜಲವಿದ್ಯುತ್ ಯೋಜನಗಳಿಗೆ ಮೂಲ ಈ ಶರಾವತಿ ನದಿ. ಬಹುಶಃ ಜಲವಿದ್ಯುತ್ ಉತ್ಪಾದನೆಗಾಗಿಯೇ ನಿರ್ಮಿಸಿದ ಹಲವಾರು ದೊಡ್ಡ ಆಣೆಕಟ್ಟೆಗಳಿಗೆ ಮೂಲ ಈ ಶರಾವತಿ. ಶರಾವತಿ ಕಣಿವೆ  ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಉಕ್ಕುವ ಶರಾವತಿಯ ಹುಟ್ಟಿನ ಹಿಂದೆ ಒಂದು ಕಥೆಯೇ ಇದೆ. ಸೀತೆಯ ಬಾಯಾರಿಕೆ ತಣಿಸಲು ರಾಮ ಹೂಡಿದ ಬಾಣ ಅರ್ಥಾತ್ ಶರದಿಂದ ಹುಟ್ಟಿದ ಚಿಲುಮೆ ಈ ಶರಾವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಜಿಲ್ಲೆಯ ಮೂಲಕ ಹರಿದು ಗೇರುಸೊಪ್ಪೆಯ ಬಳಿ ಉತ್ತರ ಕನ್ನಡ ಜಿಲ್ಲೆಯ ಪ್ರವೇಶ ಮಾಡುವ ಶರಾವತಿ ಸಮುದ್ರ ಸೇರುವುದು ಹೊನ್ನಾವರದ ಬಳಿ. ವಿಶ್ವ ವಿಖ್ಯಾತ ಜೋಗ ಜಲಪಾತದ ಕಾರಣಕರ್ತೆಈ ಶರಾವತಿ. ಜೋಗದಲ್ಲಿ ೮೩೦ ಅಡಿಗಳಷ್ಟು ಎತ್ತರದಿಂದ ಧುಮುಕುವ ಶರಾವತಿ ಭಾರತದ ಎತ್ತರದ ಸಿಂಗಲ್ ಡ್ರಾಪ್ ಜಲಪಾತ. ಮಳೆಗಾಲದಲ್ಲಿ ಜೋಗದ ವೈಭವ ಪದಗಳಿಗೆ ನಿಲುಕದ್ದು. ಶರಾವತಿಯ ಪಾತ್ರದ ತುಂಬಾ ತಲೆ ಎತ್ತಿರುವ ಜಲವಿದ್ಯುದಾಗರಗಳು ೩. ಲಿಂಗನಮಕ್ಕಿ ಜಲಾಶಯದ ಘಟಕ, ಜೋಗದ ಉತ್ಪಾದನಾ ಘಟಕ, ಗೇರುಸೊಪ್ಪದ ಉತ್ಪಾದನಾ ಘಟಕ. ಒಟ್ಟು ಉತ್ಪಾದನೆಯಾಗುವ ವಿದ್ಯುತ್  ೧೩೪೦ ಮೆಗಾ ವಾಟ್. ಜೋಗದ ಉತ್ಪಾದನಾ ಘಟಕದ್ದು ಉತ್ಪಾದನೆಯಲ್ಲಿ ಮೇಲುಗೈ. ೧೦೩೫ ಮೆಗಾ ವಾಟ್ ಗಳಷ್ಟು ವಿದ್ಯುತ್ ಉತ್ಪಾದಿಸುವಜೋಗದ ಮಹಾತ್...